Tuesday, 17 May 2011

ಯಡಿಯೂರಪ್ಪ v/s ಭಾರದ್ವಾಜ್

 ಅದೇ ಸೀರಿಯಲು, ರಿಯಾಲಿಟಿ ಷೋ, ಕ್ರಿಕೆಟ್ ನೋಡಿದ ಕರ್ನಾಟಕದ ಜನತೆಗೆ ಬಹಳ ಬೇಜಾರು ಬಂದಿತ್ತು. ಆದರೆ ಬಾರಧ್ವಜರ ಆಗಮನದಿಂದ ಪ್ರತಿ ದಿನವೂ ಮನರಂಜನೆ ಸಿಗುತ್ತಾ ಇದೆ. ಈಗ ಗಲ್ಲಿ ಗಲ್ಲಿಗಳಲ್ಲೂ ಕರ್ನಾಟಕದ ರಾಜಕೀಯದ ಬಗ್ಗೆನೇ ಮಾತುಕತೆ.

ಮಾನ್ಯ ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಲು ಪ್ರಯತ್ನಿಸಿತಿದ್ದರೆ, ರಾಜ್ಯಪಾಲರನ್ನೇ ಓಡಿಸುವ ತುರಾತುರಿಯಲ್ಲಿ ಬಿ ಜೆ ಪಿ ಪಾಳಯವಿದೆ. ರಾಜ್ಯಪಾಲರು ಕಾಂಗ್ರೆಸ್ಸಿನ ಏಜೆಂಟ್ ಎಂದು ಯಡಿಯೂರಪ್ಪನವರು ಹೇಳುತಿದ್ದರೆ, ಯಡಿಯೂರಪ್ಪನವರಿಗೆ ನೈತಿಕವಾಗಿ ಆಡಳಿತ ನಡೆಸುವ ಹಕ್ಕಿಲ್ಲ್ಲವೆನ್ನುವುದು ರಾಜ್ಯಪಾಲರ ವಾದ

ಯಡಿಯೂರಪ್ಪನವರು ನಿಜವಾಗಿಯೂ ಧೋಷಿಯಾಗಿದ್ದರೆ,ರಾಜ್ಯದ ಕಾನೂನು ಕಟ್ಟಲೆಗಳು ಏನು ಮಾಡುತ್ತಿವೆ?  ವಿರೋಧ ಪಕ್ಷದವರು ಏನೆಲ್ಲ ಮಸಿ ಬಳಿದರೂ, ಬಿ ಜೆ ಪಿ ಯನ್ನೇ ಮತ್ತೆ ಮತ್ತೆ ಗೆಲ್ಲಿಸುವ ಪ್ರಜೆಗಳು ಮೂರ್ಖರೆ? ಏನೇ ಇರಲಿ ಕರ್ನಾಟಕದಲ್ಲಿ ರಾಜಕೀಯವೆಂಬ ಟಿ-ಟ್ವೆಂಟಿ ಮ್ಯಾಚು ನಡೆಯಿತ್ತಿದೆ.

ಮಣ್ಣ್ಹಿನ  ಮಗನಾದ ದೇವೇಗೌಡರು ಈಗಾಗಲೇ ಪಿಚ್ಚನ್ನು ಸಿದ್ಧಗೊಳಿಸಿದ್ದಾರೆ. ಯಡಿಯೂರಪ್ಪ v/s  ಭಾರದ್ವಾಜ್ ರ ಅಭ್ಯಾಸ ಪಂದ್ಯವಂತು ಈಗಾಗಲೇ ಮುಗಿದಿದೆ.ಇನ್ನೇನಿದ್ದರೂ ಹೊಡಿ ಬಡಿ ಆಟವಷ್ಟೇ.

ಮಾನ್ಯ ರಾಜ್ಯಪಾಲರೇ, ಉತ್ತಮ ಕೋಚನ್ನು ಆರಿಸಿರಿ. ಗೂಗ್ಲಿ ಮುಂತಾದ ಉತ್ತಮ ಎಸೆತಗಳನ್ನು ಎಸೆಯಿರಿ. ವೈಡ್, ನೋ ಬಾಲಂತೂ  ಬೇಡವೇ ಬೇಡ.

ಮಾನ್ಯ ಮುಖ್ಯಮಂತ್ರಿಗಳೇ, ನೀವು ಇನ್ನೂ ಉತ್ತಮ ಕೋಚಿನ ಮೊರೆ ಹೋಗಿ. ಉತ್ತಮವಾದ ಹೊಡೆತವನ್ನು ನೀಡಿರಿ. ಹೊಸ ಹೊಸ ಹೊಡೆತಗಳನ್ನು ಅವಿಷ್ಕರಿಸಿರಿ. ಐ ಪಿ ಎಲ್ ನ ಹೊಸ ಶಾಟ್, ಎಸೆತಗಳಿಗೆ ಅಫಿಷ್ಯಲ್ ಪಾರ್ಟ್ನರ್ಗಳು ಇರುವಂತೆ, ನೀವೂ ನಿಮ್ಮ ಪಾರ್ಟ್ನರ್ಗಳನ್ನು ಹುಡುಕಿರಿ.ಅನೇಕ ಟೀ ವಿ  ಚಾನೆಲ್ ಗಳು ಇದ್ದರೂ ಐ ಪಿ ಎಲ್ ಮ್ಯಾಚುಗಳು ಒಂದೇ ಚಾನೆಲ್ ನಲ್ಲಿ ಪ್ರಸಾರಗೊಳ್ಳುವಂತೆ   ನಿಮ್ಮ ಮ್ಯಾಚಿನ ಕಾಪಿ ರೈಟನ್ನು ಯಾವುದಾದರು ಚಾನೆಲ್ ಗೆ ನೀಡಿ.

ಏನೇ ಮಾಡಿ, ಎಷ್ಟೇ ಮ್ಯಾಚನ್ನು ಆಡಿ ಆಟವಂತು ತುಂಬಾ ಫೈಟ್ ಆಗಿರಬೇಕು.ಗೆದ್ದವರಿಗೆ ಸರಕಾರ ನಡೆಸುವ ಅವಕಾಶ. ಉತ್ತಮ  ಪ್ರದರ್ಶನ ನೀಡಿದರೂ ಸೋತ ತಂಡಗಳ ಸದಸ್ಯರುಗಳಿಗೆ "ಮ್ಯಾನ್ ಆಫ್ ದ ಮ್ಯಾಚ್" ಯಾ "ಮ್ಯಾನ್ ಆಫ್ ದ ಸೀರಿಸ್" ನೀಡಲಾಗುವುದಿಲ್ಲ .ಅದೇನಿದ್ದರೂ ಗೆದ್ದ ತಂಡಗಳಿಗೆ ಸೀಮಿತ.ನಮ್ಮವರು, ತಮ್ಮವರು ಎಂಬ ಯೋಚನೆಯನ್ನು ಬಿಡಿ. ಗೆಲ್ಲುವುದಷ್ಟೇ ತಮ್ಮ ಗುರಿಯಗಿರಲಿ. ಇನ್ನೂ ಉತ್ತಮ ಮನರಂಜನೆಯನ್ನು ನೀಡಿ.

ಉಭಯ ತಂಡಗಳಿಗೂ ಆಲ್ ದಿ ಬೆಸ್ಟ್........   



No comments:

Post a Comment