Friday, 10 June 2011

ಮುಂಗಾರು ಮಳೆಯೇ..............

 ಹೊರಗಡೆ ಮಳೆ ಸುರಿಯುತ್ತಿದೆ. ಬಾಲವಾಡಿ, ಶಾಲೆಗಳಿಗೆ ಹೋಗುತ್ತಿರುವ ಚಿಣ್ಣರು "ಹುಯ್ಯೋ ಹುಯ್ಯೋ ಮಳೆರಾಯ......." ಎಂದು ಮಳೆಯನ್ನು ಸ್ವಾಗತಿಸುತ್ತಿದರೆ, l k g, u  k  g, ಕಾನ್ವೆಂಟ್ಗೆ ಹೋಗುತ್ತಿರುವ ಮಕ್ಕಳು "rain  rain  go  away"ಎಂದು ಮಳೆಯನ್ನು ಓಡಿಸುತಿದ್ದಾರೆ. ಇವುಗಳೆರಡು ಮುಗ್ಧ ಮನಸ್ಸಿನ ಶಿಶುಗಳ ಅಚ್ಚುಮೆಚ್ಚಿನ ಗೀತೆಗಳಾದರೂ, ಇಬ್ಬರು ಕವಿಗಳು ಇವರುಗಳ ಮೂಲಕ ತಮ್ಮ ಮನೊಇಚ್ಚೆಯನ್ನು ಪ್ರಸ್ತುತಪಡಿಸಿದ್ದಾರೆ.   

ಅಂಗ್ಲ ಕವಿಯು ಮಕ್ಕಳಿಗೆ ಶಾಲೆಗೆ ಹೋಗಲು ಅಡ್ಡಿಪಡಿಸುತ್ತಿರುವ ಮಳೆರಾಯನನ್ನು ಈ ದಿನ ಬರದೆ ಮುಂದೊಂದು ದಿನ ಬಾರಪ್ಪ ಅಂದಿದ್ದಾನೆ. ಮುಂದಿನ ದಿನವೂ ಇದೇ ಗೀತೆಯನ್ನು ಹಾಡಿದರೆ ಮಳೆರಾಯ ಯಾವಾಗ ಬರಲು ಸಾಧ್ಯ? ಆದರೆ ಕನ್ನಡ ತನದ ಸೊಗಡಿರುವ ಇನ್ನೊಂದು ಗೀತೆಯಲ್ಲಿ ಪುಟಾಣಿಗಳು, ತಮಗೆ ತೊಂದರೆಯಾದರೂ ಪರವಾಗಿಲ್ಲ ಒಣಗುತ್ತುತ್ತಿರುವ ತೋಟ, ಗದ್ದೆಗಳನ್ನು ತಂಪೆರೆಯಲು ಇನ್ನೂ ಜೋರಾಗಿ ಸುರಿ ಎಂದು  ಮಳೆಯನ್ನು ಭಿನ್ನವಿಸಿಕೊಲ್ಲುತಿದ್ದಾರೆ. ಇಲ್ಲಿ, ಆಂಗ್ಲ ಗೀತೆಯ ಮೂಲಕ ವಿದೇಶಿಯರ ಸ್ವಾರ್ಥತೆ ಪ್ರಧರ್ಶನಗೊಂದರೆ, ಕನ್ನಡ ಗೀತೆಯ ಮೂಲಕ ನಮ್ಮವರ 'ಪರೋಪಕಾರಿ' ಭಾವನೆ ಪ್ರಕಟವಾಗಿದೆ. ಭಿನ್ನತೆ ಏನೇ ಇರಲಿ, ಈ ಎರಡೂ ಗೀತೆಗಳಲ್ಲಿ ಮಳೆರಾಯನನ್ನು 'target ' ಮಾಡಲಾಗಿದೆ. 

ಚಿಕ್ಕಂದಿನಿಂದಲೂ ಮಳೆಗಾಲದ ಸವಿಯನ್ನು ಅನುಭವಿಸುತ್ತಾ ಬೆಳೆದವನು ನಾನು. ಆ ದಿನಗಳಲ್ಲಿ ಮಳೆಗಾಲದ ನೆಪವೊಡ್ಡಿ ಶಾಲೆಗೆ ಹೋಗಲು ಹಿಂಜರಿದವನಲ್ಲ. ಮಳೆಗಾಲಕ್ಕಾಗಿಯೇ ಕೆಲವು ತಯಾರಿಗಳನ್ನು ಮಾಡುತಿದ್ದೆವು. ಪಾಠಪುಸ್ತಕ, ನೋಟ್ ಪುಸ್ತಕಗಳನೆಲ್ಲ ಒಂದು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ ಮತ್ತೆ ಶಾಲಾ ಬ್ಯಾಗಿಗೆ ತುರುಕುತ್ತಿದೆವು.ಗಾಳಿಗೆ ಕೊಡೆ ಓಡಿಹೋಗುವ ಸಂಭವವಿರುತ್ತಿದ್ದುದರಿಂದ highschool  ಗೆ ಹೋಗುವ ತನಕ ರೈನ್ ಕೋಟುಗಳನ್ನೇ ಧರಿಸುತ್ತಿದ್ದೆವು. ನಾನು ಇನ್ನು ಇಂದಿನ ಯುವ ಜನಾಂಗಕ್ಕೆ ಸೇರಿದವನದರೂ, ನಾವು ಶಾಲೆಗೆ ಹೋಗುವ ಸಮಯದಲ್ಲಿ ಇಂದಿನ ಮಕ್ಕಳಂತೆ ಶಾಲಾ ವ್ಯಾನು, ಅಟೋ ಏನು ಇರಲಿಲ್ಲ.ನಡೆದುಕೊಂಡೇ ಶಾಲೆಗೆ ಹೋಗಬೇಕಾಗಿತ್ತು. ಮಳೆಯಲ್ಲಿಯೇ ಶಾಲೆಗೆ ತೆರಳಿ ಪಾಠ ಪ್ರವಚನಗಳನ್ನು ಕೇಳಿ ಸಂಜೆಯೂ ಸಹ ಮಳೆ ಸುರಿಯುತ್ತಿದರೆ ಅದೇ ಮಳೆಯಲ್ಲಿ ಮನೆಗೆ ಹಿಂದಿರುಗುತ್ತಿದೆವು. ಇದಕ್ಕೆ ನಾನೆಂದೂ ಗೊಣಗುತ್ತಿರಲಿಲ್ಲ. ಅದೇ ಮಳೆಯಲ್ಲಿ ಏನೋ ಖುಷಿ ಕಾಣುತ್ತಿದ್ದೆ. ಮಳೆಯಲ್ಲಿ ನೆನೆದು ಬಂದಂತಹ ಮಕ್ಕಳನ್ನು 
ಶೀತ, ಜ್ವರ ಅವರಿಸಿಕೊಳ್ಳದಿರಲಿ ಎಂದು ಸಂಜೆಗೇನೆ ತಾಯಿಯವರು ಸುಡು ಸುಡು ಬಿಸಿ ಸ್ನಾನದ ನೀರನ್ನು ತಯಾರು ಮಾಡಿ ಇಡುತಿದ್ದರು. ಹೀಗೆ ನನ್ನ ಹೆತ್ತವರು, ಮಕ್ಕಳು ಶಾಲೆಗೆ ಗೈರು ಹಾಜರಗಬಾರದು ಹಾಗೇನೆ ಅನರೋಗ್ಯದಿಂದಲೂ ನರಳ ಬಾರದೆಂದು ಅತೀವ ಕಾಳಜಿ ವಹಿಸುತ್ತಿದ್ದರು.

ಕಾಲೇಜು ತಲುಪುವಾಗಲಂತೂ ಮಳೆಗಾಲದಲ್ಲಿ ಹಲವರು ಮಾರ್ಪಾಡುಗಳು ಆಗಿದ್ದವು. ರೈನ್ ಕೋಟುಗಳ ಜಾಗಕ್ಕೆ ಜಾಕೆಟ್ ಗಳು ಬಂದಿದ್ದವು. ನಗರ ಪ್ರದೇಶದಲ್ಲಿ ಕೊಡೆ ಹಿಡಿದು ಸಂಚರಿಸುವುದು ಸ್ವಲ್ಪ ತ್ರಾಸದಾಯಕವಾಗಿರುವುದರಿಂದ, ಕೊಡೆಯ ಬಳಕೆಯನ್ನು ಕಮ್ಮಿ ಗೊಳಿಸಿ ತುಂತುರು ಮಳೆಯಲ್ಲಿ ನೆನೆದುದೆ ಬಹಳ. ಮಳೆ ತೀರ ಅತಿಯಾದ ಸಂದರ್ಭದಲ್ಲಿ 'ರೈನಿ ಹಾಲಿಡೆ' ಸಿಕ್ಕಿದ್ದೂ ಇದೆ. 

ಉದ್ಯೋಗ ಸಿಕ್ಕಿದ ಬಳಿಕ, ಈಗ ಅನುಭವಿಸುತ್ತಿರುವ ಮಳೆಗಾಲದ ಖುಷಿಯೇ ಬೇರೆ. ಹೇಳಿ ಕೇಳಿ ಬಿಸಿಲ ನಾಡಾದ ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವವನು ನಾನು. ಕೆಂಡದಂತಹ ತಾಪಮಾನದಿಂದ ರಾತ್ರಿ-ಹಗಲು ನರಳಿದ ಬಳಿಕ ಮಳೆರಾಯನನ್ನು ಕಂಡಾಗ ಆಗುವ ಆನಂದ ಅವರ್ಣನೀಯ.

ಹೀಗೆ ಮಳೆಗಾಲ ಪ್ರತಿಯೊಬ್ಬರ ಜೀವನದಲ್ಲಿ ತನ್ನದೇ ಅದ ಸ್ಥಾನವನ್ನು ಗಳಿಸಿಕೊಂಡಿದೆ.ಈ ಮಳೆ ಚಲನಚಿತ್ರ ತಯಾರಕರಿಗೂ ಬಹಳ ಅಚ್ಚುಮೆಚ್ಚು. ಮಳೆ ಸುರಿಸುತ್ತಾ, ಮಳೆ ಹೆಸರಿನಲ್ಲಿ ಬಂದ ಅನೇಕ ಸಿನಿಮಾಗಳು, ಮಳೆಯಲ್ಲಿ ಶೂಟಿಂಗು ಮಾಡಲ್ಪಟ್ಟ ಅನೇಕ ಸಾಂಗುಗಳು ಸೂಪರ್ ಹಿಟ್ ಆಗಿವೆ. ಕೆಲವರ ಮನಸ್ಸಿನಲ್ಲಿ ಈ ಮಳೆ ಕಪ್ಪು ಚುಕ್ಕೆಯಗಿರುವುದು ಸುಳ್ಳಲ್ಲ. ಮಳೆಯ ಕೆಟ್ಟ ಅವಾಂತರದಿಂದ ನರಳಿದವರು ಅನೇಕ. ಮಳೆಯಂತಹ ಪ್ರಾಕೃತಿಕ ಶಕ್ತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲದಿದ್ದರೂ ಸರಕಾರ-ಜನತೆ ಇಚ್ಚಿಸಿದರೆ ಇದರ ಅಡ್ಡ ಪರಿಣಾಮವನ್ನು ಕುಗ್ಗಿಸಬಹುದು.

ನೀವು ಏನೇ ಹೇಳಿ, ಮಳೆಗೆ ಮಳೆಯೇ ಸಾಟಿ. ಸ್ವಲ್ಪ ಭ್ರಮಾಲೋಕಕ್ಕೆ ಹೋಗಿ.... ಮಳೆಗಾಲದ ಒಂದು ಸುಂದರ ಮುಸ್ಸಂಜೆ...ಮಾಡಲು ಏನೂ ಪ್ರಮುಖ ಕೆಲಸವಿಲ್ಲ....ಚಾವಡಿಯಲ್ಲೊಂದು ಆರಾಮ ಕುರ್ಚಿ...ಬಲಗೈಯಲ್ಲಿ ನಿಮ್ಮ ಅಚ್ಚುಮೆಚ್ಚಿನ ಬರಹಗಾರನ ಕಾದಂಬರಿ....ಎಡಗೈಯಲ್ಲಿ ಕಾಫಿ ಕಪ್.... ಹೊರಗಡೆ ಧೋ ಧೋ ಎಂದು ಸುರಿಯುವ ಮಳೆ...... ಇದೇ ಮಳೆಯೊಂದಿಗೆ ಕಾಫಿ, ಕಾದಂಬರಿ ಆಸ್ವಾದಿಸುವ ಸುಖ ಯಾರಿಗುಂಟು ಯಾರಿಗಿಲ್ಲ. ಮುಂಗಾರಿನ ಮುತ್ತಿನ ಮತ್ತಿನಿಂದ ನಿಷೆಗೊಳಗಾದ ಕವಿಯು ಅದಕ್ಕೆ ಹೇಳಿರಬೇಕು......ಮುಂಗಾರು ಮಳೆಯೇ........ಏನು ನಿನ್ನ ಹನಿಗಳ ಲೀಲೆ......

No comments:

Post a Comment