ಇಡೀ ದೇಶವೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಕೆಲವರಲ್ಲಂತೂ ದೇಶ ಪ್ರೇಮ ಉಕ್ಕಿ ಹರಿಯುತ್ತಿದೆ.ನಾಡನ್ನೆ ಲೂಟಿ ಹೊಡೆದ ನಾಯಕರುಗಳ ಕೈಯಲ್ಲಿ ಧ್ವಜಾರೋಹಣ ನಡೆಸಲ್ಪಡುತ್ತದೆ. ಕೆಲವರಿಗಂತೂ ಉಳಿದ ರಜೆಗಳಂತೆ ಇದೂ ಕೂಡಾ ಒಂದು. ಬ್ರಿಟಿಷರ ಆಡಳಿತದಲ್ಲಿ ಬಳಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪೀಳಿಗೆಯವರಲ್ಲಿ ಕೆಲವರೇ ಇಂದು ಬದುಕಿ ಉಳಿದಿದ್ದಾರೆ. ಭಾರತ ದೇಶವು ಬ್ರಿಟೀಷರ ಆಡಳಿತದಲ್ಲಿದ್ದಾಗ ಪಟ್ಟಂತಹ ಪಾಡೇನು ಎಂಬುದರ ಬಗ್ಗೆ ಕಲ್ಪನೆಯನ್ನೂ ಮಾಡಲು ನಾವು ಸಿದ್ಧರಿಲ್ಲ. ಇದರಿಂದಾಗಿ ದಿನೇ ದಿನೇ ಸ್ವಾತಂತ್ರ್ಯದ ಮಹತ್ವವೂ ಕಡಿಮೆಯಾಗುತ್ತಿದೆ. ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯ ಸ್ವಲ್ಪ ಹೆಚ್ಚೇ ಆಗಿ ಅದು ಸ್ವೇಚ್ಚಾಚಾರವಾಗಿ ಪರಿವರ್ತನೆಯಾಗಿದೆ.
ನಮ್ಮ ಇನ್ನೊಬ್ಬ ಮುಖ್ಯ ವೈರಿಯೆ೦ದರೆ ಅದು ಮತ್ಸರ. ರಾಮ-ರಾವಣರ ಯುದ್ದದ ಮುನ್ನ ಪೂಜಾ ಸ೦ದರ್ಭದಲ್ಲಿ ಯಾವಾಗ ರಾಮನಿಗೆ ಬ್ರಾಹ್ಮಣನೊಬ್ಬನು ಸಿಗುವುದಿಲ್ಲವೋ ಆಗ ಅವನು ತನ್ನ ವೈರಿಯಾದ ರಾವಣನನ್ನೇ ಪೂಜಾ ಕಾರ್ಯ ನೆರವೆರಿಸಿಕೊಳ್ಳಲು ಭಿನ್ನವಿಸಿಕೊಳ್ಳುತ್ತಾನೆ. ವಿಪ್ರೋತ್ತಮನಾದ ರಾವಣನು ಯಾವುದೇ ಮತ್ಸರಕೊಳಗಾಗದೆ ಪೂಜೆ ನೆರವೇರಿಸಿ, ರಾಮನನ್ನು ತುಂಬು ಮನಸ್ಸಿನಿಂದ ಹರಸುತ್ತಾನೆ. ಬದ್ಧ ವೈರಿಯಾದರೂ ಸಹ ಬೇಡಿದಲ್ಲಿ ತುಂಬು ಹೃದಯದಿಂದ ಆಶೀರ್ವದಿಸಬೇಕೆಂದು ವೇದೋಕ್ತಿಗಳು ಹೇಳುತ್ತವೆ. ಆದರೆ ಇತರರು ನಮ್ಮ ಬಂಧು ಮಿತ್ರರೇ ಆಗಿರಲಿ, ಆದರೆ ರೂಪ-ಗುಣ-ಐಶ್ವರ್ಯ-ಅಂತಸ್ತುವಿನಲ್ಲಿ ನಮಗಿಂತ ಉತ್ತಮರಾಗಿದ್ದರೆ, ನಾವು ಹೊಟ್ಟೆ ಕಿಚ್ಚು ಪಟ್ಟೇ ಪಡುತ್ತೇವೆ. ಬರಿ ಅಷ್ಟಕ್ಕೇ ಸೀಮಿತವಾಗದೆ ಎಲ್ಲಾ ರೀತಿಯಲ್ಲೂ ಅವರ ಕಾಲೆಳೆಯುವ ಪ್ರಯತ್ನ ಮಾಡುತ್ತೇವೆ.
ಅರಿಷಡ್ವರ್ಗಗಳ ಪರಿಕಲ್ಪನೆ ಜಗತ್ತಿಗೆ ಭಾರತದ ಶ್ರೇಷ್ಠ ಕೊಡುಗೆ. ನಮ್ಮ ಪುರಾಣ, ವೇದ, ಉಪನಿಷತ್ತು, ಮೀಮಾಂಸೆ ಇವುಗಳೆಲ್ಲಾ ಇದರ ಸುತ್ತೆ ತಿರುಗಾಡುತ್ತವೆ. ನಿಮಗೆ ಇವು ಯಾವುದರ ಬಗ್ಗೆಯೂ ನಂಬಿಕೆ ಇಲ್ಲವೆಂದಾದರೆ ಇವುಗಳನೆಲ್ಲಾ ಬದಿಗಿರಿಸೋಣ. ಸ್ವಲ್ಪ ಮುಂದುವರಿದು ದೇಶವೆಂಬ ಕಲ್ಪನೆಯನ್ನೂ ಮರೆತು ವೈಜ್ಞಾನಿಕ ದ್ರಿಷ್ಟಿಯಿಂದ ನೋಡಿದಾಗಲೂ ಅರಿಷಡ್ವರ್ಗಗಳು ವ್ಯಕ್ತಿಗೆ ಮಾರಕವಾಗಿವೆ. ನಾವು ದಿನ ನಿತ್ಯ ಕೇಳುವಂತಹ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳು ಹಲವಾರು ಸಂಧರ್ಭಗಳಲ್ಲಿ ನಮ್ಮೊಳಗೇ ಇರುವ ಆರು ವೈರಿಗಳಿಂದ ಬಂದದ್ದಾಗಿದೆ. ಇಂದು ಪ್ರತಿಯೋರ್ವರೂ ಹೆಚ್ಚು-ಕಡಿಮೆ ಅರಿಷಡ್ವರ್ಗಗಳಿಂದ ಕಟ್ಟಲ್ಪಟ್ಟವರೆ.ಆದರೂ ಅದಕ್ಕೆ ಮಿತಿ, ಗಡಿಗಳು ಎನ್ನುವುದಿರುತ್ತದೆ. ಅದು ದಾಟಲ್ಪಟ್ಟರೆ ಮಾನಸಿಕ ಖಾಯಿಲೆಯಾಗಿ ನಮಗೆ 'ಹುಚ್ಚು' ಎಂಬ ಪಟ್ಟ ಸಿಕ್ಕರೂ ಸಿಗಬಹುದು.
ನಮ್ಮ ಮನಸ್ಸಿನೊಳಗೆ ಆಂತರಿಕ ಕಲಹಗಳಿದ್ದರೂ, ನಮ್ಮ ದೇಶವು ಜಗತ್ತಿನ ಸುಭದ್ರ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣವಿಲ್ಲವೆಂದಲ್ಲ. ನಮ್ಮಲ್ಲಿ ಕೀಚಕರೊಂದಿಗೆ ಕೃಷ್ಣರೂ ಇದ್ದಾರೆ. 'ಸಮತ್ವ'ವನ್ನು ಪಡೆದ ಯೋಗಿಗಳಿದ್ದಾರೆ.ದೇಶಸೇವೆಗೆಂದು ತಮ್ಮ ಜೀವನವನ್ನೇ ಒತ್ತೆ ಇಟ್ಟಿರುವ ಹಲವಾರು ರಾಜಕಾರಣಿಗಳಿದ್ದಾರೆ. ಹಗಲು ರಾತ್ರಿಯೆನ್ನದೆ ದೇಶವನ್ನು ಕಾಯುತ್ತಿರುವ ಯೋಧರಿದ್ದಾರೆ. ದೇಶದಲ್ಲಿರುವ ಕೆಲವೇ ಕೆಲವು ಜನರುಗಳಿಂದ ಇಷ್ಟು ಸಾಧ್ಯವಾಗಿರುವಾಗ, ಇನ್ನು ಎಲ್ಲರೂ ಉತ್ತಮರಾದರೆ ಹೇಗಿರಬೇಡ? ಅರಿಷಡ್ವರ್ಗಗಳಿಗೆ 'ಬೈ' ಅನ್ನೋಣ...... ಕಾಯಾ, ವಾಚಾ, ಮನಸಾ ಶುದ್ಧರಾಗೋಣ...... ಒಳ್ಳೆಯದನ್ನು ಮಾಡಲಾಗದಿದ್ದರೂ, ಕೆಟ್ಟ ವಿಚಾರಗಳಿಂದ ದೂರವಿರೋಣ........ಧರ್ಮ,ಅರ್ಥ, ಕಾಮ, ಮೋಕ್ಷಗಳನ್ನು ಹೊಂದೋಣ..........ನಿಜಾರ್ಥದಲ್ಲಿ ಸ್ವತಂತ್ರರಾಗೋಣ.....................ಸ್ವಾತಂತ್ರ್ಯದ ಶುಭಾಶಯಗಳು.................
ಹಲವಾರು ಹೋರಾಟಗಳ ಪರಿಣಾಮವಾಗಿಯೇ ಭಾರತವು ಸ್ವತಂತ್ರವಾಯಿತು. ನಾವು ಹೊರಗಿನವರಾದ ಆಂಗ್ಲರಿಂದ ಸ್ವಾತಂತ್ರಗೊಂಡಿರಬಹುದು. ಆದರೆ ನಮ್ಮೊಳಗಿನ ಶತ್ರುಗಳಾದ ಅರಿಷಡ್ವರ್ಗಗಳಿಂದ ಸ್ವತಂತ್ರಪಡೆಯಲು ಸಾಧ್ಯವಾಗಿಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ದುಷ್ಟ ಶಕ್ತಿಗಳು ನಮ್ಮನ್ನು ಆಳುತ್ತಿವೆ. ಅಂದು ನಾವು ಇದೆ ಶಕ್ತಿಗಳಿಂದ ಬಂಧಿತರಾಗಿದ್ದುದರಿಂದಲೇ ಬ್ರಿಟೀಷರು ಭಾರತಕ್ಕೆ ಬರಲು ಸಾಧ್ಯವಾಯಿತು. ಇದೆ ಚಾಳಿಯನ್ನು ಮುಂದುವರಿಸಿದರೆ ಇನ್ನೊಂದು ದೇಶವೂ ನಮ್ಮನ್ನು ಆಳಲು ಇಚ್ಚಿಸಬಹುದು.
'ಕಾಮಾತುರಾಣಾಂ ನ ಭಯ ನ ಲಜ್ಜಾ' ಎಂದು ನಮ್ಮ ಪೂರ್ವಿಕರೇ ಹೇಳಿ ಬಿಟ್ಟಿದ್ದಾರೆ. ಇಂದು ನಮಗೆ ಆಸೆ ಹೆಚ್ಚಾಗುತ್ತಿದೆ. ಕಂಡದ್ದೆಲ್ಲಾ ಪಡೆಯುವ ಇಚ್ಛೆ ಅಧಿಕವಾಗುತ್ತಿದೆ. ನಮ್ಮ ಆಕಾಂಕ್ಷೆಯನ್ನು ಹತ್ತಿಕ್ಕಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಭೋಗ ಭಾಗ್ಯಗಳ ಅಭಿಲಾಷೆಯಲ್ಲಿ ಅಡ್ಡ ದಾರಿ ಹಿಡಿಯುತ್ತಿದ್ದೇವೆ. ಅತ್ಯಾಚಾರ, ಅನಾಚಾರ ಮೇರೆ ಮೀರುತ್ತಿದೆ. ಕಲಿಯುಗದಲ್ಲಿ ಕಾಮಿನಿ-ಕಾಂಚನಗಳ ಹಿಂದೆ ಹೋಗುವವರು ಅಧಿಕವಾದ ಹಾಗೆ ಮಾಡಿದ ಪಾಪಕ್ಕೂ ಇದೇ ಜನ್ಮದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಗರಣಗಳಲ್ಲಿ ಪಾಲುದಾರರಾದ ಘಟಾನುಘಟಿಗಳೆಲ್ಲ ಒಬ್ಬೊಬ್ಬರಾಗಿ ಜೈಲು ಪಾಲಾಗುತಿದ್ದಾರೆ.
ಇಂದು ನಾವು ಕೋಪವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲವೆನ್ನುವಂತೆ ನಡೆದುಕೊಳ್ಳುತಿದ್ದೇವೆ. ಕ್ಷಣ-ಕ್ಷಣಕ್ಕೂ ಸಿಟ್ಟುಗೊಳ್ಳುತಿದ್ದೇವೆ. ಇದೇ ಕೋಪ ವಿಪರೀತವಾಗಿ ತಂದೆ ಮಗನನ್ನೂ, ಮಗ ತಾಯಿಯನ್ನೂ ಕೊಂದಂತಹ ಘಟನೆಗಳೂ ಬಹಳಷ್ಟಿವೆ. ಇದೇ ಕ್ರೋಧದಿಂದಾಗಿ ಸ್ನೇಹಿತರು, ಬಂಧುಗಳು ದೂರವಾಗುತ್ತಿದ್ದಾರೆ. ನಾವು ಎಷ್ಟು ಉತ್ತಮರಾಗಿದ್ದರೂ ಸಹ ಕೆಲವೊಮ್ಮೆ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಏನೇನೋ ಮಾಡುತಿದ್ದೇವೆ. ಕೋಪ ನಮ್ಮ ವೈರಿಯಾದರೂ, ಹಲವಾರು ಸಂಧರ್ಭಗಳಲ್ಲಿ ಅದನ್ನು ನಮ್ಮ ಸ್ನೇಹಿತನಾಗಿ ಪರಿವರ್ತಿಸಿಕೊಳ್ಳಬಹುದು. ಎಲ್ಲಿ ಕೋಪವನ್ನು ಪ್ರದರ್ಶಿಸಬೇಕೋ ಅಲ್ಲಿ ನಾವು ಪ್ರದರ್ಶಿಸುವುದಿಲ್ಲ. ಆಗ ನಾವು ಶಿಖ0ಡಿಗಳಂತೆ ವರ್ತಿಸುತ್ತೇವೆ. ಜಗತ್ತು ನಡೆಯುವುದೇ ಹೀಗೆ ಎಂದು ಶಾಂತ ಮೂರ್ತಿಗಳಾಗಿ ಬಿಡುತ್ತೇವೆ.
'ದೇಶ ತನಗೇನು ಕೊಟ್ಟಿತು ಎಂಬುವುದು ಮುಖ್ಯವಲ್ಲ. ನಾನು ದೇಶಕ್ಕೆ ಏನು ಕೊಟ್ಟೆ ಅದು ಮುಖ್ಯ' ಹೀಗೆ ಎಲ್ಲೋ ಓದಿದ ನೆನಪು. ಆದರೆ ನಾವಿಂದು ಇತರರಿಂದಲೇ ಏನನ್ನಾದರೂ ಬಯಸುತ್ತೆವೆಯೇ ಹೊರತು ನಾವು ಏನನ್ನೂ ಕೊಡಲು ಸಿದ್ಧರಿಲ್ಲ. ಬರೀ ನಾವೇ ಶ್ರೀಮಂತರಾಗುತಿದ್ದೆವೆಯೇ ಹೊರತು ಹೃದಯ ಶ್ರೀಮಂತಿಕೆ ಬೆಳೆಸುತ್ತಿಲ್ಲ. ತೆರಿಗೆಯನ್ನು ನೀಡದೆ ಸರಕಾರಕ್ಕೆ ಮೋಸಮಾಡುತಿದ್ದೇವೆ. ಸಿಕ್ಕ ತೆರಿಗೆಯಲ್ಲಿ ಜನಸೇವೆ ಮಾಡುತಿದ್ದೇವೆ ಎಂದು ಸಾರಿ ಅರ್ಧದಷ್ಟು ಹಣ ಗುಳುಂ ಮಾಡುವ ರಾಜಕಾರಣಿಗಳು ಜನತೆಗೆ ಮೋಸ ಮಾಡುತಿದ್ದಾರೆ. ಪರಮ ಲೋಭಿಗಳಾದ ಪುರಂದರರೆ, ದಾಸ ಶ್ರೆಷ್ಟರಾದ ನಾಡಿದು. ಆದರೆ ನಮ್ಮ ಲೋಭತನವನ್ನು ಹೋಗಲಾಡಿಸಲು ಆ ಪರಮಾತ್ಮನೇ ಇಳಿದು ಬರಬೇಕೋ ಗೊತ್ತಾಗುತ್ತಿಲ್ಲ.
ಹೇಗೆ ನಾವು ಲೋಭಿಗಳಾಗಿ ಲಾಭದ ಬಗ್ಗೆ ಚಿಂತಿತರಾಗಿದ್ದೆವೆಯೋ ಹಾಗೇನೆ ಮೋಹ ಪಾಶಕ್ಕೊಳಗಾಗಿ ಬಂಧಿತರಾಗಿದ್ದೇವೆ. ಕೆಲವರು ತಮ್ಮನ್ನು ತಾವೇ ಅತಿಯಾಗಿ ಪ್ರೀತಿಸಿದರೆ, ಇನ್ನು ಅನೇಕರು ತಮ್ಮ ಕುಟುಂಬದ ಸದಸ್ಯರನ್ನೂ ಅಥವಾ ಗೆಳೆಯರನ್ನೂ ಅತಿಯಾಗಿ ಮೊಹಿಸುವವರಾಗಿರುತ್ತಾರೆ.ಅವರ ಬಗ್ಗೆ ಇವರಿಗೆ ಎಷ್ಟು ಮೋಹವಿರುತ್ತದೆಯೆಂದರೆ, ಅವರಿಗಾಗಿ ಏನೂ ಮಾಡಲು ತಯಾರಿರುತ್ತಾರೆ. ಇದು ಹಾಳಲ್ಲವೆ೦ದು ಮೇಲ್ನೋಟಕ್ಕೆ ಕಂಡು ಬಂದರೂ ಇದರಿಂದ ಇತರರು ತೊಂದರೆಗೊಳಗಾಗುತ್ತಾರೆ. ಗಂಡು ಮಕ್ಕಳು ಮೋಹಿಸಲ್ಪಟ್ಟು ಹೆಣ್ಣು ಮಕ್ಕಳು ಮೂದಲಿಕೆಗೆ ಒಳಗಾಗುತಿದ್ದಾರೆ.ದೊಡ್ದವನನ್ನು ತಾಯಿ ಹೆಚ್ಚಾಗಿ ಪ್ರೀತಿಸಿದರೆ, ಚಿಕ್ಕವನನ್ನು ತಂದೆಯು ಅತಿಯಾಗಿ ಹಚ್ಚಿಕೊಳ್ಳುತ್ತಾನೆ. ಇದು ಕೆಲವೊಮ್ಮೆ ಸಂಸಾರ ಕಲಹಕ್ಕೂ ಕಾರಣವಾಗುತ್ತದೆ. ಒಬ್ಬ ಅಥವಾ ಕೆಲವೇ ಶಿಷ್ಯಂದಿರಿಗೆ ಪ್ರಾಮುಖ್ಯತೆಯನ್ನು ಕೊಟ್ಟು ಗುರುಗಳು ಇತರರನ್ನು ಕಡೆಗಣಿಸುತ್ತಿದ್ದಾರೆ. ಅನ್ಯಾಯದಲ್ಲಿ ಪಾಲುಗಾರನಾಗಿದ್ದಾನೆ ಎಂದು ತಿಳಿದಿದ್ದರೂ ತನ್ನ ಪಕ್ಷಕ್ಕೆ ಸೇರಿದವನೆನ್ನುವ ಕಾರಣದಿಂದ ಆರೋಪಿಯನ್ನು ಶಿಕ್ಷಿಸಲು ರಾಜಕಾರಣಿಗಳು ತಯಾರಿಲ್ಲ. ನಾವು ವ್ಯಕ್ತಿ-ವ್ಯಕ್ತಿಯನ್ನು ಮೋಹಿಸುತ್ತೇವೆಯೇ ಹೊರತು ದೇಶವನ್ನೇ ಪ್ರೀತಿಸಲು ಮನ ಮಾಡುತ್ತಿಲ್ಲ.
ಮದಗೊಳಗಾದ ಆನೆಯ ಹಿ೦ಡು ನಾಡಿಗಾದರೂ ಪ್ರವೇಶಿಸಲಿ ಅಥವಾ ಇನ್ನೊಂದು ಕಾಡಿಗಾದರೂ ಹೋಗಲಿ ಆ ಪ್ರದೇಶವು ಇನ್ನಿಲ್ಲದಂತೆ ನಿರ್ನಾಮವಾಗಿ ಬಿಡುತ್ತದೆ. ಅಂತಹ ಆನೆಗಳಿಗೂ ನಮಗೂ ಇಂದು ಯಾವುದೇ ವ್ಯತ್ಯಾಸ ತಿಳಿಯುತಿಲ್ಲ. ಇನ್ನು ಕೆಲವರಿಗೆ ಹಣಬಲ, ಜನಬಲದ ಮದ ಹತ್ತಿ ಬಿಟ್ಟಿದೆ.ನಮ್ಮ ಅಧಿಕಾರ, ಬೆಳವಣಿಗೆ ಬಗ್ಗೆ ಹೆಮ್ಮೆ ಪಡುವುದು ತಪ್ಪಲ್ಲ, ಆದರೆ ಇದೇ ಹೆಮ್ಮೆ ಮದದ ರೂಪ ಪಡಕೊ೦ಡಾಗ ಆಗುವ ಅನಾಹುತಗಳಿಗೆ ಎಣೆಯಿಲ್ಲ. ಆಗ ನಾವು ನಡೆದದ್ದೇ ದಾರಿ ಎಂಬಂತೆ ನಡೆದುಕೊಳ್ಳುತ್ತೇವೆ. ಆದರೆ ಆ ದಾರಿಯಲ್ಲಿ ಖೆಡ್ಡಾಗಳಿವೆ, ಕಂದಕಗಳಿವೆ ಎಂದು ನಮಗೆ ತಿಳಿದು ಬರುವುದೇ ಇಲ್ಲ.ಹಣಬಲ, ಜನಬಲವಿದೆಯೆಂದು ಮದದಿಂದ ಚುನಾವಣೆಗೆ ನಿಂತಂತಹ ಅನೇಕ ಪುಂಡರು ಟೇವಣಿಯನ್ನೂ ಸಹ ಕಳಕೊಂಡಿದ್ದಾರೆ.ತಾವೇ ಶಕ್ತಿವ೦ತರೆಂದು ತಿಳಿದುಕೊಂಡ ಗಲ್ಲಿ ಗಲ್ಲಿ ರೌಡಿಗಳೆಲ್ಲಾ ಘೋರ ಮರಣವನ್ನು ಕಂಡಿದ್ದಾರೆ.
ಅರಿಷಡ್ವರ್ಗಗಳ ಪರಿಕಲ್ಪನೆ ಜಗತ್ತಿಗೆ ಭಾರತದ ಶ್ರೇಷ್ಠ ಕೊಡುಗೆ. ನಮ್ಮ ಪುರಾಣ, ವೇದ, ಉಪನಿಷತ್ತು, ಮೀಮಾಂಸೆ ಇವುಗಳೆಲ್ಲಾ ಇದರ ಸುತ್ತೆ ತಿರುಗಾಡುತ್ತವೆ. ನಿಮಗೆ ಇವು ಯಾವುದರ ಬಗ್ಗೆಯೂ ನಂಬಿಕೆ ಇಲ್ಲವೆಂದಾದರೆ ಇವುಗಳನೆಲ್ಲಾ ಬದಿಗಿರಿಸೋಣ. ಸ್ವಲ್ಪ ಮುಂದುವರಿದು ದೇಶವೆಂಬ ಕಲ್ಪನೆಯನ್ನೂ ಮರೆತು ವೈಜ್ಞಾನಿಕ ದ್ರಿಷ್ಟಿಯಿಂದ ನೋಡಿದಾಗಲೂ ಅರಿಷಡ್ವರ್ಗಗಳು ವ್ಯಕ್ತಿಗೆ ಮಾರಕವಾಗಿವೆ. ನಾವು ದಿನ ನಿತ್ಯ ಕೇಳುವಂತಹ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳು ಹಲವಾರು ಸಂಧರ್ಭಗಳಲ್ಲಿ ನಮ್ಮೊಳಗೇ ಇರುವ ಆರು ವೈರಿಗಳಿಂದ ಬಂದದ್ದಾಗಿದೆ. ಇಂದು ಪ್ರತಿಯೋರ್ವರೂ ಹೆಚ್ಚು-ಕಡಿಮೆ ಅರಿಷಡ್ವರ್ಗಗಳಿಂದ ಕಟ್ಟಲ್ಪಟ್ಟವರೆ.ಆದರೂ ಅದಕ್ಕೆ ಮಿತಿ, ಗಡಿಗಳು ಎನ್ನುವುದಿರುತ್ತದೆ. ಅದು ದಾಟಲ್ಪಟ್ಟರೆ ಮಾನಸಿಕ ಖಾಯಿಲೆಯಾಗಿ ನಮಗೆ 'ಹುಚ್ಚು' ಎಂಬ ಪಟ್ಟ ಸಿಕ್ಕರೂ ಸಿಗಬಹುದು.
ನಮ್ಮ ಮನಸ್ಸಿನೊಳಗೆ ಆಂತರಿಕ ಕಲಹಗಳಿದ್ದರೂ, ನಮ್ಮ ದೇಶವು ಜಗತ್ತಿನ ಸುಭದ್ರ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣವಿಲ್ಲವೆಂದಲ್ಲ. ನಮ್ಮಲ್ಲಿ ಕೀಚಕರೊಂದಿಗೆ ಕೃಷ್ಣರೂ ಇದ್ದಾರೆ. 'ಸಮತ್ವ'ವನ್ನು ಪಡೆದ ಯೋಗಿಗಳಿದ್ದಾರೆ.ದೇಶಸೇವೆಗೆಂದು ತಮ್ಮ ಜೀವನವನ್ನೇ ಒತ್ತೆ ಇಟ್ಟಿರುವ ಹಲವಾರು ರಾಜಕಾರಣಿಗಳಿದ್ದಾರೆ. ಹಗಲು ರಾತ್ರಿಯೆನ್ನದೆ ದೇಶವನ್ನು ಕಾಯುತ್ತಿರುವ ಯೋಧರಿದ್ದಾರೆ. ದೇಶದಲ್ಲಿರುವ ಕೆಲವೇ ಕೆಲವು ಜನರುಗಳಿಂದ ಇಷ್ಟು ಸಾಧ್ಯವಾಗಿರುವಾಗ, ಇನ್ನು ಎಲ್ಲರೂ ಉತ್ತಮರಾದರೆ ಹೇಗಿರಬೇಡ? ಅರಿಷಡ್ವರ್ಗಗಳಿಗೆ 'ಬೈ' ಅನ್ನೋಣ...... ಕಾಯಾ, ವಾಚಾ, ಮನಸಾ ಶುದ್ಧರಾಗೋಣ...... ಒಳ್ಳೆಯದನ್ನು ಮಾಡಲಾಗದಿದ್ದರೂ, ಕೆಟ್ಟ ವಿಚಾರಗಳಿಂದ ದೂರವಿರೋಣ........ಧರ್ಮ,ಅರ್ಥ, ಕಾಮ, ಮೋಕ್ಷಗಳನ್ನು ಹೊಂದೋಣ..........ನಿಜಾರ್ಥದಲ್ಲಿ ಸ್ವತಂತ್ರರಾಗೋಣ.....................ಸ್ವಾತಂತ್ರ್ಯದ ಶುಭಾಶಯಗಳು.................